PLACE YOUR AD HERE AT LOWEST PRICE
ಕೋಲಾರ ನಗರದ ಬುದ್ಧ ವಿಹಾರದಲ್ಲಿ ನಡೆದ ಮಾನವ ಬಂದಿದ್ವ ವೇದಿಕೆ ಸಂಘಟನಾ ಸಮಾವೇಶ ಅತ್ಯಂತ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಜಿಲ್ಲೆಯಾದ್ಯಂತ ವಿವಿಧ ತಾಲೂಕುಗಳಿಂದ ಆಗಮಿಸಿದ್ದ ಬಂಧುತ್ವ ಮುಖಂಡರು, ಸಾಹಿತಿ, ಚಿಂತಕರು, ಕಲಾವಿದರು, ಪತ್ರಕರ್ತರು, ಸಾಮಾಜಿಕ ಹೋರಾಟಗಾರರು ಭಾಗವಸಿ,ಜಿಲ್ಲೆಯಲ್ಲಿ ಮಾನವ ಬಂದುತ್ವ ಚಳುವಳಿ ಬಲವರ್ಧನೆಗೆ ನಿರ್ಧಾರ ಕೈಗೊಳ್ಳಲಾಯಿತು.
ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಜಾನಪದ ಅಕಾಡೆಮಿ ಮಾಜಿ ಅದ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಪಾಲ್ಗೊಂಡು ಮಾತನಾಡಿದರು. ವಿಭಾಗಿಯ ಸಂಚಾಲಕರಾದ ಆರ್.ಜಯಕುಮಾರ್ MBV ಕೋಲಾರ ಜಿಲ್ಲೆಯ ದಿಕ್ಸೂಚಿಯಾಗಿ ಮಾರ್ಗದರ್ಶನ ಮಾಡಿದರು.
ಬೆಂಗಳೂರು ನಗರ ಸಂಚಾಲಕರಾದ ಎ.ಕೆ. ಕರುಣಾಕರ, ಮುಖಂಡರಾದ ಹನುಮಂತಯ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದವರು ಮಾತನಾಡಿ ಚಳುವಳಿ ಬಲವರ್ಧನೆಗೆ ನೆರವಾಗುವ ಭರವಸೆ ನೀಡಿದರು.
ನೂತನ ಜಿಲ್ಲಾ ಸಂಘಟನಾ ಸಮಿತಿ.
ಪ್ರಧಾನ ಸಂಚಾಲಕರಾಗಿ ಬೀರಮಾನಹಳ್ಳಿ ಅಂಜನಪ್ಪ, ಜಿಲ್ಲಾ ಸಂಚಾಲಕರಾಗಿ ಕ್ಯಾಸಂಬಳ್ಳಿ ಸುಮತಿ, ಸಹ ಸಂಚಾಲಕರಾಗಿ ಶಾರದಮ್ಮ, ಡಾ. ಶಿವಣ್ಣ, ಶ್ರೀನಾಥ್ ನಾಸ್ತಿಕ್, ನಿರಂಜನ್ ಆಯ್ಕೆಯಾದರು.
ಸಮಿತಿ ಸದಸ್ಯರಾಗಿ ಚೌಡಪ್ಪ, ಎಸ್.ನಾರಾಯಣಸ್ವಾಮಿ, ರಮೇಶ್, ಸೋಮಶೇಖರ್, ನಿರಂಜನ್, ರಾಮಾಂಜನಪ್ಪ, ಮಂಜುಳಾ, ಯುವಶಕ್ತಿ ಸುಬ್ಬು, ಗಂಗಾಧರ್, ಮುನಿರಾಜು, ರಾಮಕೃಷ್ಣ, ನವೀನ್, ವೆಂಕಟಾಚಲಪತಿ, ಆಯ್ಕೆಯಾದರು.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.