PLACE YOUR AD HERE AT LOWEST PRICE
ಬಂಗಾರಪೇಟೆ:ವಿದ್ಯಾರ್ಥಿಗಳಿಲ್ಲದ ಶಿಕ್ಷಕನ ಯಶಸ್ಸು ಸಾಧ್ಯವಿಲ್ಲ. ಶಿಕ್ಷಕರು ಉತ್ತಮ ಮಾರ್ಗದರ್ಶಕರಾಗಿ, ಚಿಂತಕರಾಗಿ, ತತ್ವಜ್ಞಾನಿಯಾಗಿ,, ವಿದ್ಯಾರ್ಥಿಗಳ ಬೌದ್ಧಿಕ ಮಾನಸಿಕ ದೈಹಿಕ ಬೆಳವಣಿಗೆಗೆ ಸಹಕರಿಸುತ್ತಾ ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಅಂಬೇಡ್ಕರ್ ಪ್ರಚಾರ ಸಮಿತಿ ಅಧ್ಯಕ್ಷ ಬಾಬು ಅಭಿಪ್ರಾಯ ಪಟ್ಟರು.
ಅವರು ತಾಲೂಕಿನ ಡಿಕೆ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಂ,ವಿ, ನಗರದಲ್ಲಿರುವ ಲಿಟಲ್ ಫ್ಲವರ್ ಶಾಲೆಯಲ್ಲಿ ಶಿಕ್ಷಕರ ಮತ್ತು ಮಕ್ಕಳ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ.
ಅವರು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು ನೀಡುವುದು ಮಾತ್ರವಲ್ಲದೆ ಯುವ ಮನಸ್ಸುಗಳ ಪ್ರತಿಭೆ ಮತ್ತು ಆಕಾಂಕ್ಷೆಗಳನ್ನು ಪೋಷಿಸುತ್ತಾರೆ. ಅವರ ತಾಳ್ಮೆ, ಸಹಾನುಭೂತಿ ಮತ್ತು ಅವರ ವೃತ್ತಿಯ ಬಗ್ಗೆ ಬದ್ಧತೆ ಮಕ್ಕಳ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದರು.
ಶಿಕ್ಷಕರು ವಿದ್ಯಾರ್ಥಿಗಳಿಗೆ ಯಾಂತ್ರಿಕವಾಗಿ ಪುಸ್ತಕದಲ್ಲಿರುವ ವಿಷಯಗಳ ಜ್ಞಾನ ಭಂಡಾರವನ್ನು ತುಂಬುವುದರ ಜೊತೆಗೆ ಅನುಭವಗಳ ಮೂಲಕ ಜ್ಞಾನವನ್ನು ಮೂಡಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ಸೃಜನಾತ್ಮಕ ಕ್ರಿಯಾಶೀಲ ವ್ಯಕ್ತಿಗಳನ್ನಾಗಿ ಮಾಡುವುದರ ಮೂಲಕ ನವ ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಬೇಕು ಎಂದರು.
ಮುಂದಿನ ದಿನಮಾನಗಳಲ್ಲಿ ಶಿಕ್ಷಕರ ಮತ್ತು ಮಕ್ಕಳ ದಿನಾಚರಣೆಯನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲಾಗುವುದು ಕನಿಷ್ಠ ಪಕ್ಷ ೧೫೦ ಕ್ಕೂ ಹೆಚ್ಚು ಶಿಕ್ಷಕರು ವೈದ್ಯರು ಇಂಜಿನಿಯರ್ ಗಳು ಹಾಗೂ ಯೋಧರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ಸ್ಥಳೀಯ ಶಿಕ್ಷಕರನ್ನು ಗೌರವಿಸಿ ಸನ್ಮಾನಿಸಲಾಯಿತು.
ಈ ವೇಳೆ ಲಿಟಲ್ ಫ್ಲವರ್ ಶಾಲೆಯ ಅಧ್ಯಕ್ಷರಾದ ಮಮ್ತಾಜ್ ಬೇಗಂ, ರವಿ, ಪ್ರಧಾನ ಕಾರ್ಯದರ್ಶಿ ಆರೀಫ್ ಅಹಮ್ಮದ್ ಅಯಾಜ್, ಕಾರ್ಯದರ್ಶಿ ಅಮ್ರೀನ್, ಯೋಧ ಪ್ರಕಾಶ್ ಅಲೆಗ್ಜಾಂಡರ್ , ಶಿಕ್ಷರಾದ ನಾಗರಾಜ್, ಶಶಿಕಲಾ, ಧನಲಕ್ಷ್ಮಿ, ರಂಗನಾಥ್, ನಿವೃತ್ತ ಶಿಕ್ಷಕ ವೆಂಟಸ್ವಾಮಿ, ಅಂಗನಾಡಿ ಶಿಕ್ಷಕಿ ಕರವೇ ಚಿತ್ರದೇವಿ, ಉಪನ್ಯಾಸಕರಾದ ಜಯಂತಿ, ಮುರಳೀಧರ್, ಗ್ರಾಪಂ ಸದಸ್ಯೆ ಸವಿತಬಾಬು, ಎಂವಿ ನಗರ ಸೇವಾಭಿವೃದ್ಧಿ ಸಮಿತಿಯ ವೆಂಕಟಸ್ವಾಮಿ, ವಕೀಲ ರಿಚರ್ಡ್, ಮುಖಂರಾದ ಬೋಷ್ಲೆ, ಕರುಣಾಮೂರ್ತಿ, ಗರೀಶ್, ಕುಮರೇಷನ್, ಮುರುಗನ್, ಶೋಬಿತ್, ಶವರಾಜ್ ಮೊದಲಾದವರಿದ್ದರು.