PLACE YOUR AD HERE AT LOWEST PRICE
ಬಂಗಾರಪೇಟೆ:ತಾಲ್ಲೂಕಿನ ಕಸಬಾ ಹೋಬಳಿಗೆ ಸೇರಿದ ಚಿಕ್ಕವಲಗಮಾದಿ ಕಂದಾಯ ವೃತ್ತದ ಕೇಂದ್ರ ಸ್ಥಾನವಾದ ಚಿಕ್ಕವಲಗಮಾದಿ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕಛೇರಿ ತೆರೆಯುವಂತೆ ಸ್ಥಳೀಯರು ತಹಶೀಲ್ದಾರರಿಗೆ ಮನವಿ ಮಾಡಿದ್ದಾರೆ.
ಚಿಕ್ಕವಲಗಮಾದಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಮೂಲಕ ಇಂದು ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು. ಮನವಿಯಲ್ಲಿ ಚಿಕ್ಕವಲಗಮಾದಿ ಕಂದಾಯ ವೃತ್ತವಾಗಿದ್ದು ಇಲ್ಲಿ ಗ್ರಾಮ ಆಡಳಿತಾಧಿಕಾರಿ ಕಛೇರಿ ಇಲ್ಲದೆ ಇರುವುದರಿಂದ ಸಾರ್ವಜನಿಕರಿಗೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಮಾಡಿಸಿಕೊಳ್ಳಲು ತುಂಬಾ ತೊಂದರೆಯಾಗುತ್ತಿದೆ.
ಪಾರದರ್ಶಕ ಆಡಳಿತಕ್ಕಾಗಿ ಮತ್ತು ಜನರಿಗೆ ಮೊದಲ ಆಡಳಿತಾಧಿಕಾರಿ ಸುಲಭವಾದಿ ದೊರೆತಬೇಕೆಂದು ಪ್ರತಿ ಕಂದಾಯ ವೃತ್ತದಲ್ಲಿ ಕಛೇರಿ ತೆರೆಯಲು ಸರ್ಕಾರಿ ಆದೇಶದಂತೆ ಈ ಕೂಡಲೆ ಚಿಕ್ಕವಲಗಮಾದಿ ಗ್ರಾಮದಲ್ಲಿ ಗ್ರಾಮ ಆಡಳಿತಾಧಿಕಾರಿ ಕಛೇರಿ ತೆರೆದು ಅಧಿಕಾರಿ ಜನತೆಗೆ ಸದಾ ಸಿಗುವಂತೆ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಮನವಿ ನೀಡುವ ವೇಳೆ ಗ್ರಾಮ ಪಂಚಾಯಿತಿ ಮಾಜಿ ಸಧಸ್ಯ ಅಂಬೇಡ್ಕರ್, ಯುವ ಮುಖಂಡ ಸಂತೋಷ್ ಮೊದಲಾದವರಿದ್ದರು.