PLACE YOUR AD HERE AT LOWEST PRICE
ಕೋಲಾರ ; ಜನವರಿ ೧೯ ರಂದು ಸರ್ಕಾರ ವತಿಯಿಂದ ಆಚರಣೆ ಮಾಡಲಿರುವ ಶ್ರೀ ವೇಮನ ಜಯಂತಿ ಕಾರ್ಯಕ್ರಮ ಅಂಗವಾಗಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಶಂಕರ್ ವಣಿಕ್ಯಾಳ್ ನೇತೃತ್ವದಲ್ಲಿ ರೆಡ್ಡಿ ಸಮುದಾಯ ಮುಖಂಡರ ಜೊತೆ ಪೂರ್ವಬಾವಿ ಸಭೆ ನಡೆಯಿತು.
ಈ ಸಂದರ್ಭದಲ್ಲಿ ರೆಡ್ಡಿ ಜನಸಂಘದ ಕೆಜಿಎಫ್ ಅಧ್ಯಕ್ಷ ವಿಜಯರಾಘವರೆಡ್ಡಿ ಮತ್ತು ಬಂಗಾರಪೇಟೆ ಕಾರ್ಯಾಧ್ಯಕ್ಷ ಜಿ.ರಾಜಾರೆಡ್ಡಿ ಮಾತನಾಡಿ, ರೆಡ್ಡಿ ಸಮುದಾಯವನ್ನು ಗುರ್ತಿಸಿ ವೇಮನ ಜಯಂತಿ ಆಚರಣೆ ಸರ್ಕಾರ ತೆಗೆದುಕೊಂಡಿದ್ದ ನಿರ್ದೇಶನಕ್ಕೆ ಕೃತಜ್ಞತೆಗಳನ್ನು ಸಲ್ಲಿಸಿ, ಕಳೆದ ಮರ್ನಾಲ್ಕು ವರ್ಷಗಳಿಂದ ಮಹಾಮಾರಿ ಕೊರೊನಾ ವೈರಸ್ ನಿಂದ ಜಯಂತಿ ಸರ್ಕಾರಿ ಕಛೇರಿಗೆ ಮಾತ್ರ ಸೀಮಿತವಾಗಿತ್ತು.
ಆದರೆ ನಿರೀಕ್ಷಿತ ಮಟ್ಟದಲ್ಲಿ ಆಚರಣೆ ಮಾಡಲು ಸಾಧ್ಯವಾಗಲಿಲ್ಲ. ಈ ಬಾರಿ ಸಾರ್ವಜನಿಕರ ಸಹಕಾರದೊಂದಿಗೆ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಬೇಕಾಗಿದೆ. ಈಗಾಗಿ ಮೊದಲಿಗೆ ಜಿಲ್ಲೆಯ ಸಮುದಾಯದ ಮುಖಂಡರೊಂದಿಗೆ ಸಭೆ ನಡೆಸಿ ಯಾವ ರೀತಿಯಲ್ಲಿ ಕಾರ್ಯಕ್ರಮ ನಡೆಸಬೇಕು ಎಂದು ತೀರ್ಮಾನಿಸಿ ತಮ್ಮ ಗಮನಕ್ಕೆ ಒಂದು ವಾರದೊಳಗಡೆ ತಿಳಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಸಮುದಾಯದ ಮುಖಂಡರ ಹೆಸರುಗಳನ್ನು ಮುದ್ರಿಸುವ ಬಗ್ಗೆಯೂ ಚರ್ಚೆ ನಡೆಯಬೇಕಾಗಿದ್ದು, ಅವರ ಹೆಸರುಗಳನ್ನು ಅಂತಿಮವಾಗಿ ಸಮುದಾಯದ ಸಭೆಯಲ್ಲಿ ನಿರ್ಧರಿಸಿ ತಿಳಿಸಲಾಗುವುದು. ಅದೇ ದಿನದಂದು ವೇಮನ ಜಯಂತಿ ಕಾರ್ಯಕ್ರಮ ತಾಲ್ಲೂಕು ಮಟ್ಟದ ಸರ್ಕಾರಿ ಕಛೇರಿಯಲ್ಲೂ ಆಚರಣೆ ಮಾಡಲಿರುವುದರಿಂದ ಜಿಲ್ಲಾ ಕೇಂದ್ರದಲ್ಲಿ ಆಚರಣೆ ಮಾಡಲಿರುವ ಪೂಜೆಯನ್ನು ೧೧ ಗಂಟೆಗೆ ನಿಗಧಿಮಾಡಬೇಕೆಂದು ಮುಖಂಡರು ಮನವಿ ಮಾಡಿಕೊಂಡರು.
ಪ್ರತಿಕ್ರಿಯೆ ನೀಡಿದ ಅಪರ ಜಿಲ್ಲಾಧಿಕಾರಿ, ಜಿಲ್ಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಸರ್ಕಾರ ದಿಂದ ೬೦ ಸಾವಿರ ರೂ.ಗಳನ್ನು ಮಂಜೂರು ಮಾಡಲಾಗಿದೆ. ಯಾವ ರೀತಿಯಲ್ಲಿ ಕಾರ್ಯಕ್ರಮ ಆಚರಣೆ ಮಾಡೋಣ ಎಂದು ವಾರದೊಳಗಡೆ ತಿಳಿಸಬೇಕೆಂದು ಹೇಳಿದರು. ಸರ್ಕಾರ ನೀಡುವ ಹಣದ ಜೊತೆಗೆ ಸಮುದಾಯ ದಿಂದಲೂ ಹಣ ಸೇರಿಸಿ ಅರ್ಥಪೂರ್ಣವಾಗಿ ಜಯಂತಿ ಮಾಡಲಾಗುವುದು ಎಂದು ಮುಖಂಡರು ಸಭೆ ಗಮನಕ್ಕೆ ತಂದರು. ಇದೇ ವೇಳೆ ಅಪರ ಜಿಲ್ಲಾಧಿಕಾರಿಗಳಿಗೆ ರೆಡ್ಡಿ ಜನಸಂಘ ವತಿಯಿಂದ ಸನ್ಮಾನ ಮಾಡಲಾಯಿತು.
ರೆಡ್ಡಿ ಜನಸಂಘದ ಮುಖಂಡರಾದ ವಸಂತಕವಿತ ಕೆ.ಸಿ.ರೆಡ್ಡಿ, ವೇಣುಗೋಪಾಲರೆಡ್ಡಿ, ನಡುಪಳ್ಳಿ ರಾಘವೇಂದ್ರ, ಮುಳಬಾಗಿಲು ತಾಲ್ಲೂನಿನ ವಾರಿದಿ ಮಂಜುನಾಥರೆಡ್ಡಿ, ವಿಶ್ವನಾಥರೆಡ್ಡಿ ಕೇಶವರೆಡ್ಡಿ, ತ್ಯಾಗರಾಜರೆಡ್ಡಿ, ವೇಮಣ್ಣ, ಆನಂದರೆಡ್ಡಿ, ವೆಂಕಟರಾಮಪ್ಪ, ಕೆಜಿಎಫ್ ತಾಲ್ಲೂಕಿನ ಪದ್ಮನಾಭರೆಡ್ಡಿ, ರಾಮಕೃಷ್ಣಾರೆಡ್ಡಿ, ಬಂಗಾರಪೇಟೆ ತಾಲ್ಲೂಕಿನ ಅದ್ಯಕ್ಷ ತಿಪ್ಪಾರೆಡ್ಡಿ, ಪತ್ರಕರ್ತ ವಿ.ಶಿವಾರೆಡ್ಡಿ, ಗೋಲ್ಡ್ ರೆಡ್ಡಿ, ಮತ್ತಿತ್ತರರು ಇದ್ದರು.