PLACE YOUR AD HERE AT LOWEST PRICE
ಕೆಜಿಎಫ್:ಇಸ್ವತ್ತು ಮರು ಮುದ್ರಣ ಪ್ರತಿಗೆ ಕಛೇರಿಯಲ್ಲೇ 1ಸಾವಿರದ 200ರೂ ಲಂಚ ಸ್ವೀಕರಿಸಿರುವ ಘಟನೆ ತಾಲ್ಲೂಕಿನ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿ ಕಛೇರಿಯಲ್ಲಿ ನಡೆದಿದೆ.
ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ನಾಗಲೇಪಲ್ಲಿಯ ನಾರಾಯಣಮ್ಮ ರವರ ಮನೆಯ ಇಸ್ವತ್ತು ಪ್ರತಿಯ ಮರು ಮುದ್ರಣಕ್ಕೆ ನಾರಾಯಣಮ್ಮರ ಮಗ ಅನುಕುಮಾರ್ ಗ್ರಾಪಂ ಕಛೇರಿಯಲ್ಲಿ ಮನವಿ ಮಾಡಿದಾಗ ಆತನ ಬಳಿ 1 ಸಾವಿರದ 200ರೂ ಹಣ ಪಡೆದುಕೊಂಡು ಪ್ರತಿ ನೀಡಿರುವ ಘಟನೆ ನಡೆದಿದೆ.
ಇಸ್ವತ್ತ ಪ್ರತಿಯ ಶುಲ್ಕ 50ರೂ ಇದ್ದು ಹೆಚ್ಚುವರಿಯಾಗಿ ಹಣಕ್ಕೆ ಬೇಡಿಕೆ ಇಟ್ಟು ಗ್ರಾಮ ಪಂಚಾಯಿತಿ ಕಛೇರಿಯಲ್ಲೇ ಬಿಲ್ ಕಲೆಕ್ಟರ್ ಸುಬ್ರಮಣಿ 1ಸಾವಿರದ 200 ರೂ ಪಡೆದುಕೊಂಡು ಪಿಡಿಒ ರಷ್ಮಿರ ಟೇಬಲ್ ಡ್ರಾನಲ್ಲಿ ಇಡುವ ದೃಷ್ಯ ಇರುವ ವಿಡಿಯೋ ಸಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದಕ್ಕೂ ಮೊದಲು ಇಸ್ವತ್ತು ಖಾತೆಗೆಂದು ಅನುಕುಮಾರ್ ರಿಂದ ಬಿಲ್ ಕಲೆಕ್ಟರ್ ಸುಬ್ರಮಣಿರ ಬ್ಯಾಂಕ್ ಖಾತೆಗೆ ಪೋನ್ ಪೇ ಮೂಲಕ 1ಸಾವಿರ ರೂ ಪಡೆದುರುವ ಸ್ಕ್ರೀನ್ ಶಾಟ್ ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತದೆ.
…………………………………..
ಮಾಜಿ ಮುಖ್ಯಮಂತ್ರಿ ಕೆ.ಸಿ.ರೆಡ್ಡಿರವರ ಗ್ರಾಮ ಮತ್ತು ಸಂಸದರ ಆದರ್ಶ ಗ್ರಾಮವೂ ಆದ ಕ್ಯಾಸಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕ್ರಮ ಜರುಗಿಸಬೇಕಾದ ಮೇಲಧಿಕಾರಿಗಳು ಕಣ್ಣುಮುಚ್ಚಿ ಕುಳಿತುರುವುದು ದುರಂತ,. ನಾಗಲೇಪಲ್ಲಿ ಇಸ್ವತ್ತು ಪ್ರಕರಣದಲ್ಲಿ ಸರ್ಕಾರಿ ಶುಲ್ಕ 50ರೂ ಇದ್ದು ಮೂರು ಸಾವಿರ ಲಂಚ ಪಡೆದುಕೊಂಡಿದ್ದಾರೆ. ಜವಾಬ್ದಾರಿಯುತ ಸರ್ಕಾರಿ ಅಧಿಕಾರಿಗಳ ಲಂಚಾವತಾರಕ್ಕೆ ಮೇಲಧಿಕಾರಿಗಳು ಕಡಿವಾಣ ಹಾಕಬೇಕು. ಕಛೇರಿಯಲ್ಲೇ ನೇರವಾಗಿ ಲಂಚ ಸ್ವೀಕರಿಸಿರುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಷ್ಮಿ ಮತ್ತು ಬಿಲ್ ಕಲೆಕ್ಟರ್ ಸುಬ್ರಮಣಿರನ್ನು ಅಮಾನತ್ತುಗೊಳಿಸಬೇಕು ಎಂದು ಒತ್ತಾಯಿಸುತ್ತೇನೆ.
ಜೈಭೀಮ್ ಶ್ರಿನಿವಾಸ್ ಅಧ್ಯಕ್ಷರು, ಡಾ.ಬಿ.ಆರ್.ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ.