• Tue. Apr 30th, 2024

PLACE YOUR AD HERE AT LOWEST PRICE

ಸರ್ಕಾರ ನಿಗದಿಪಡಿಸಿರುವ ಬೆಲೆಗಿಂತ ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಾಟ ಮಾಡಿತ್ತಿದ್ದ ಅಂಗಡಿಯೊಂದರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಪರವಾನಗಿಯನ್ನು ಅಮಾನತ್ತು ಮಾಡಿರುವ ಘಟನೆ ಕೆಜಿಎಫ್ ನ ರಾಬರ್ಟ್ ಸನ್ ಪೇಟೆಯಲ್ಲಿ ನಡೆದಿದೆ.

ಕೆಜಿಎಫ್ ತಾಲ್ಲೂಕಿನ ರಾಬರ್ಟ್ ಸನ್ ಪೇಟೆಯ ಎಂ.ಜಿ ಮಾರರ್ಕೆಟ್ ನಲ್ಲಿರುವ ಶ್ರೀ ವೆಂಕಟೇಶ್ವರ ಅಗ್ರೋ ಫರ್ಟಿಲೈಜರ್ಸ್ ನಲ್ಲಿ ರಸಗೊಬ್ಬರವನ್ನು ನಿಗದಿತ ಬೆಲೆಗೆ ಬದಲಾಗಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವಿಡಿಯೋ ಒಂದು ಇಂದು ಬೆಳಿಗ್ಗೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.

ಶ್ರೀ ವೆಂಕಟೇಶ್ವರ ಅಗ್ರೋ ಫರ್ಟಿಲೈಜರ್ಸ್ ರಸಗೊಬ್ಬರ ವ್ಯಾಪಾರಿ ಒಂದು ಚೀಲ ರಸಗೊಬ್ಬರವನ್ನು ನಿಗದಿತ ಬೆಲೆ 266 ರೂ.ಗಳ ಬದಲಿಗೆ  350 ರೂ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದು ಒಂದು ಚೀಲ  ಕಾಂಪ್ಲಾಕ್ಸ್ ಅಥವಾ ಡಿ ಎ ಪಿ ತೆಗೆದುಕೊಂಡರೆ ಮಾತ್ರ ಯೂರಿಯಾ  ಕೊಡುತ್ತೆನೆ ಇಲ್ಲಾಂದ್ರೆ  ಕೊಡಲ್ಲ ಎಂದು   ಹೇಳಿರುವುದು  ವಿಡಿಯೋದಲ್ಲಿ ಕಂಡುಬರುತ್ತಿತ್ತು.

ವಿಷಯ ತಿಳಿಯುತ್ತಿದ್ದಂತೆ ಕೃಷಿ ಇಲಾಖೆಯ ತಾಲ್ಲೂಕು ಸಹಾಯಕ ನಿರ್ಧೆಶಕಿ ಪ್ರತಿಭಾ, ಕೃಷಿ ಅಧಿಕಾರಿ ಜ್ಯೋತಿ, ಜಿಲ್ಲಾ ವಿಜಿಲಿಯನ್ಸ್ ಅಧಿಕಾರಿ ಮುರುಳಿ ರವರ ತಂಡ ಅಂಗಡಿ ಮೇಲೆ ದಾಳಿ ಮಾಡಿ ವಿಡಿಯೋದಲ್ಲಿ ಇರುವ ಆರೋಪಗಳ ಬಗ್ಗೆ ಮತ್ತು ದಾಖಲೆಗಳ ನಿರ್ವಹಣೆ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ವೇಳೆ ಅಂಡಿ ಮಾಲೀಕ ರೈತರಿಗೆ ಮೋಸ ಮಾಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಈ ಅಂಗಡಿ ಮಾಲೀಕ ಈ ಹಿಂದೆಯೂ ಇದೇ ರೀತಿ ತಪ್ಪು ಮಾಡಿದ್ದು ತಿದ್ದಿಕೊಳ್ಳಲು ಸೂಚಿಸಿದ್ದರೂ ಬದಲಾಗಿರಲಿಲ್ಲ. ಈ ಅಂಶವನ್ನು ಗಣನೆಗೆ ತೆಗೆದುಕೊಂಡಿರುವ ಅಧಿಕಾರಿಗಳು ಅಂಗಡಿ ಪರವಾನಗಿಯನ್ನು ತಾತ್ಕಾಲಿಕವಾಗಿ ರದ್ದು ಮಾಡಿ ಕ್ರಮ ಜರುಗಿಸಿದ್ದಾರೆ.

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!