PLACE YOUR AD HERE AT LOWEST PRICE
ಕೆಜಿಎಫ್:ಸುಮಾರು ೨-೩ ತಿಂಗಳಿಂದ ಮಳೆ ಇಲ್ಲದೆ ಬಿಸಿಲಿನ ಬೇಗೆಯಿಂದ ಜಾನುವಾರುಗಳು ನೀರು ಹಾಗೂ ಮೇವಿಗೆ ಪರದಾಟ ನಡೆಯುತ್ತಿದೆ. ಈ ಸಂದರ್ಭದಲ್ಲಿ ಜಾನುವಾರುಗಳ ಗೋಶಾಲೆಗೆ ಅಂಬೇಡ್ಕರ್ ಯುವ ವೇದಿಕೆ ಕರ್ನಾಟಕ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಒಣ ಮೇವು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಕೆಜಿಎಫ್ ತಾಲ್ಲೂಕಿನ ಕಾವೇರಹಳ್ಳಿ ಗ್ರಾಮದ ಬಳಿಯ ಧಾತ್ರಿ ಗೋಧಾಮ ಗೋ ಶಾಲೆಗೆ ಸಂಘಟಣೆಯ ಪದಾಧಿಕಾರಿಗಳು ಭೇಟಿ ನೀಡಿ ಗೋಶಾಲೆಯ ನಿರ್ವಹಕರ ಮನವಿಯಂತೆ ಅಗತ್ಯ ಒಣ ಮೇವು ವಿತರಿಸಿ ಜಾನುವಾರುಗಳ ಆಹಾರಕ್ಕೆ ಸಹಕರಿಸಿದ್ದಾರೆ.
ಧಾತ್ರಿ ಗೋಧಾಮನಲ್ಲಿ ಸುಮಾರು ೧೦೦ಕ್ಕೂ ಹೆಚ್ಚು ಜಾನುವಾರುಗಳು ಆಶ್ರಯ ಪಡೆಯುತ್ತಿದ್ದು, ಬೇಸಿಗೆ ಕಾಲ ಪ್ರಾರಂಭದಿಂದಲ್ಲೂ ಸಹ ಮೇವು ಕೊರತೆಯಿಂದ ಸಮಸ್ಯೆಯಾಗಿತ್ತು, ಗೋಶಾಲೆಯ ನಿರ್ವಾಹಕರು ಸಂಘಟನೆಯ ಪದಾಧಿಕಾರಿಗಳಿಗೆ ವಿಷಯ ತಿಳಿಸಿದ ಪರಿಣಾಮ ತಕ್ಷಣ ಗೋಶಾಲೆಗೆ ಭೇಟಿ ನೀಡಿ ಜಾನುವಾರುಗಳ ಆಹಾರಕ್ಕೆ ಮೇವು ಕೊಡಿಸಿದ್ದಾರೆ.
ಈ ವೇಳೆ ಅಂಬೇಡ್ಕರ್ ಯುವ ವೇದಿಕೆ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್ ಮಾತನಾಡಿ, ಗೋಶಾಲೆಯ ಜಾನುವಾರುಗಳಿಗೆ ಮೇವು, ನೀರು ಮತ್ತು ಅಗತ್ಯ ಆಹಾರ ಪದಾರ್ಥಗಳನ್ನು ದಾನ ಮಾಡುತ್ತಿದ್ದೇವೆ. ನಮ್ಮ ಸಂಸ್ಕೃತಿಯ ಪ್ರತಿಕವಾಗಿರುವ ಜಾನುವಾರುಗಳನ್ನು ರಕ್ಷಣೆ ಮಾಡಿಕೊಳ್ಳಬೇಕಿದೆ, ಪ್ರಸ್ತುತ ಜಾನುವಾರುಗಳಿಗೆ ಒಣ ಮೇವು ನೀಡಲಾಗಿದೆ, ಮುಂದಿನ ದಿನಗಳಲ್ಲಿ ಅಗತ್ಯ ಆಹಾರ ಪದಾರ್ಥಗಳನ್ನು ನೀಡಲಾಗುತ್ತದೆ ಎಂದರು.
ನಮ್ಮ ಸಂಘಟನೆವತಿಯಿಂದ ಸಮಾಜದಲ್ಲಿ ಅನ್ಯಾಯದ ವಿರುದ್ಧ ಹೋರಾಟ ಮಾಡುವುದರ ಜತೆಗೆ ಅನಾಥ ಆಶ್ರಮಗಳಿಗೆ, ಬಡವರಿಗೆ ಹಾಗೂ ಗೋಶಾಲೆಗಳಿಗೂ ಸಹ ಅಗತ್ಯ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದರು. ವೇದಿಕೆಯ ಜಿಲ್ಲಾಧ್ಯಕ್ಷ ಚರಣ್ ಗೌಡ, ಪದಾಧಿಕಾರಿಗಳಾದ ಪವನ್ ಕುಮಾರ್ ರೆಡ್ಡಿ, ಯೋಗೇಶ್, ತರುಣ್ ಸೇರಿದಂತೆ ಇತರರು ಇದ್ದರು.