• Fri. May 3rd, 2024

PLACE YOUR AD HERE AT LOWEST PRICE

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಖಚಿತವಾಗಿದ್ದು, ಕೋಲಾರ ನಗರದಲ್ಲಿ ಚುನಾವಣಾ ವಾರ್ ರೂಮ್ ಸಜ್ಜಾಗಿದೆ.

ಕೋಲಾರ ನಗರದ ಟೇಕಲ್ ರಸ್ತೆಯಲ್ಲಿ ಕಿಲಾರಿಪೇಟೆಯ ಮುನಿವೆಂಕಟ್ ಯಾದವ್ ಹೊಸದಾಗಿ ನಿರ್ಮಿಸಿದ್ದ ಕಟ್ಟಡವನ್ನು ವಾರ್ ರೂಮ್‌ಗಾಗಿ ಸಜ್ಜುಗೊಳಿಸಲಾಗುತ್ತಿದೆ. ಇತ್ತೀಚಿಗಷ್ಟೇ ಈ ಕಟ್ಟಡದ ಗೃಹಪ್ರವೇಶ ಪೂಜಾ ಕಾರ್ಯಕ್ರಮ ನಡೆದಿತ್ತು.

ಇದೇ ಕಟ್ಟಡವನ್ನು ಮೂರು ತಿಂಗಳ ಮಟ್ಟಿಗೆ ಬಾಡಿಗೆ ಪಡೆದುಕೊಂಡಿರುವ ತಂಡವೊಂದು ಚುನಾವಣಾ ವಾರ್ ರೂಮ್ ಆಗಿ ಸಜ್ಜುಗೊಳಿಸುತ್ತಿದೆ. ಇದೇ ಕಚೇರಿಯಿಂದ ಚುನಾವಣಾ ಯೋಜನೆ, ಪ್ರಚಾರ ನಡೆಯಲಿದೆ. ಇಡೀ ಚುನಾವಣೆಯ ಕೇಂದ್ರ ಕಚೇರಿಯಾಗಿ ವಾರ್ ರೂಮ್ ಕೆಲಸ ಮಾಡಲಿದೆ.

ಸಿದ್ದರಾಮಯ್ಯ ಸ್ಪರ್ಧೆಯ ಕಾರಣಕ್ಕೆ ಈ ಕಚೇರಿಯ ಕಾರ್ಯವೈಖರಿ ಮುಂದಿನ ಮೂರು ತಿಂಗಳ ಕಾಲ ರಾಜ್ಯ ಮತ್ತು ರಾಷ್ಟ್ರದ ಗಮನ ಸೆಳೆಯಲಿದೆ.

ಸಿದ್ದರಾಮಯ್ಯ ಸೋಮವಾರ ವೇಮಗಲ್‌ನಲ್ಲಿ ಮಹಿಳೆಯರ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಕೋಲಾರಕ್ಕೆ ಆಗಮಿಸಿ ವಾರ್ ರೂಂ ಅನ್ನು ಉದ್ಘಾಟಿಸಲಿದ್ದಾರೆ. ಆನಂತರ ಪೂರ್ಣ ಪ್ರಮಾಣದಲ್ಲಿ ಚುನಾವಣೆ ಮುಗಿಯುವವರೆವಿಗೂ ವಾರ್ ರೂಮ್ ಚುನಾವಣಾ ಕಾರ್ಯತಂತ್ರಗಳನ್ನು ರೂಪಿಸಲಿದೆ.

ಸುದ್ದಿ ಓದಿ ಹಂಚಿ:

 

Related Post

ಜೆಡಿಎಸ್‌ ಬಿಜೆಪಿ ಒಂದಾಗಿ ಸಂವಿಧಾನಕ್ಕೆ ಅಪಾಯ ಎಚ್ವತ್ತು ಕಾಂಗ್ರೆಸ್ ಬೆಂಬಲಿಸಿ: ಬೈರತಿ ಸುರೇಶ್
ವಚನ ಭ್ರಷ್ಟ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟಕ್ಕೆ ಮತ ಕೇಳುವ ನೈತಿಕತೆ ಇಲ್ಲ-ಕೆ.ವಿ.ಗೌತಮ್
ಏಪ್ರಿಲ್ ೨೬ ರೊಳಗೆ ಎಕ್ಸಿಡಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಆಗ್ರಹ ಇಲ್ಲವಾದಲ್ಲಿ ತೀವ್ರ ರೀತಿಯ ಹೋರಾಟ ನಡೆಸಲು ಕಾರ್ಮಿಕರ ಸಂಘಗಳ ಸಭೆಯಲ್ಲಿ ನಿರ್ಧಾರ

Leave a Reply

Your email address will not be published. Required fields are marked *

You missed

error: Content is protected !!