PLACE YOUR AD HERE AT LOWEST PRICE
ಕರ್ನಾಟಕವನ್ನು ಆಳಲು ಹೊಣೆಹೊತ್ತ ಶಾಸಕಾಂಗ,ಕಾರ್ಯಾಂಗ,ನ್ಯಾಯಾಂಗ,ಮಾಧ್ಯಮಗಳ ಬಂಧುಗಳೇ,ನಾನು ಕೇಳುತ್ತಿರುವ ಪ್ರಶ್ನೆಗೆ ಉತ್ತರ ಕೊಡುವವರು ಯಾರು? ಹಕ್ಕು,ಹಕ್ಕು ಎಂದು ಕಕ್ಕುತ್ತಿರುವ ಅನಾಗರೀಕರಿಗೆ ಪ್ರಜಾಪ್ರಭುತ್ವದ ಜವಾಬ್ದಾರಿಯೂ ಇದೆ ಎಂದು ತಿಳಿಯ ಹೇಳುವವರು ಯಾರು? ಕಳೆದ 30 ವರುಷಗಳಿಂದ ಸ್ವಂತ ದುಡಿಮೆಯಿಂದ ನಮ್ಮ ಕುಟುಂಬ ಕನಕಪುರರಸ್ತೆಯ ವಾಜರಹಳ್ಳಿಯ ಬಿ ಸಿ ಸಿ ಎಚ್ ಎಸ್ ಲೇಔಟ್ ನಲ್ಲಿ40 ×60=ರ ನಿವೇಶನಕೊಂಡು ಬದುಕಲು ಬಂದೆವು.
ಅಲ್ಲಿಂದ ಈಗಳಿಗೆಯವರೆಗೂ ಭಯ, ಭಯದಿಂದಲೇ ಬದುಕಬೇಕಾಗಿದೆ. ಇದೀಗ ಪಕ್ಕಕ್ಕೆ ಬಂದಿರುವ ಜೈ ಶಕ್ತಿ ಅಪಾರ್ಟ್ಮೆಂಟ್ ನ ವಿವಿಧ ರಾಜ್ಯದ ವಿವಿಧ ಭಾಷೆಯ ವಿವಿಧ ಮನೋವಿಕಾರದ ಜನಗಳು, ರಸ್ತೆಯೇ ಪಾರ್ಕ್ ಎನ್ನುವಂತೆ, ಪ್ಲೇ ಗ್ರೌಂಡ್ ಎನ್ನುವಂತೆ, ಪಾರ್ಕಿಂಗ್ ಪ್ಲೇಸ್ ಅಂತೆ ಬಳಸಿ, ಹಗಲು ಇರಳು ನಮ್ಮ ಕುಟುಂಬದ ನೆಮ್ಮದಿಭಂಗ ಹಾಗೂ ದೂಂಡಾವೃತ್ತಿ ಮಾಡಿ ಜೀಶಭಯ ಉಂಟು ಮಾಡುವುದರಿಂದ ರಕ್ಷಣೆ ಕೊಡುವವರು ಯಾರು? ನಮ್ಮ ಎಂ ಪಿ, ಎಂ ಎಲ್ ಎ ಗಳು ದಿವ್ಯನಿರ್ಲಕ್ಷದಿಂದ ಇದ್ದಾರೆ. ಪೋಲೀಸ್ ಠಾಣೆಗಳು, ಎ ಸಿ ಪಿ, ಡಿ ಸಿ ಪಿ ,ಕಮೀಷನರ್ ಗಳಿಗೆ ಮುಟ್ಟಿಸುವಷ್ಟು ದೊಡ್ಡ ಮನುಷ್ಯರು ನಾವಲ್ಲ.ಇದಕ್ಕೇ ಪ್ರಜಾಪ್ರಭುತ್ವ ಎನ್ನುತ್ತಾರೆಯೇ? ಬಟ್ಟೆ ಅಲ್ಲ ಎದೆ ಸೀಳಿಕೊಂಡರೂ ಈಜನ ತುಟಿಪಿಟಕ್ ಎನ್ನದೆಯೇ ಹಾಯಾಗಿಯೇ ಇದ್ದಾರಲ್ಲಾ ಮುಂದೇನು?
ಸೂಕ್ತ ಕ್ರಮ ಕೈಗೊಳ್ಳುವವರು ಯಾರು? ನನಗಲ್ಲ, ನನ್ನ ಕುಟುಂಬಕ್ಕಲ್ಲ ಈ ಅನಾಗರಿಕರನ್ನು ಬಂದುಬಸ್ತ್ ನಲ್ಲಿ ಇಡುವವರು ಯಾರು ???????
ಪುಸ್ತಕಮನೆ ಹರಿಹರಪ್ರಿಯ,
ಹಿರಿಯ ನಾಗರಿಗ,ಸಾಹಿತಿ 9845867184