PLACE YOUR AD HERE AT LOWEST PRICE
ಕೋಲಾರ:ಜೀವನನಡೆಸಲು ದೇವರು ನನಗೆ ಶಕ್ತಿ ನೀಡಿದ್ದಾರೆ ಬಿಲ್ಡರ್ ವ್ಯಾಪಾರ ವಹಿವಾಟು ಮಾಡುತ್ತಿದ್ದು, ನನಗೆ ಬರುವ ಆದಾಯದಲ್ಲಿ ಬಡಬಗ್ಗರಿಗೆ ಆರ್ಥಿಕ ಸಹಾಯ ಮಾಡಿಕೊಂಡು ಬರುತ್ತಿದ್ದೇನೆ ಎಂದರು ಝೀಯು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಹಮದ್ ಅಲಿ ಬೇಗ್.
ನಗರದ ಕ್ಲಾಕ್ ಟವರ್ ಬಳಿಯ ಝೀಯು ಸಂಸ್ಥೆಯಲ್ಲಿ 77ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು, ಸರ್ವಧರ್ಮಗಳ ಜನಾಂಗಕ್ಕೆ ಅನುಕೂಲವಾಗಲೆಂದು ಅದರಲ್ಲೂ ಬಡ ಯುವಕರಿಗೆ ಉದ್ಯೋಗ ಕಲ್ಪಿಸುವ ಸೃಷ್ಟಿಯಲ್ಲಿ ಆಟೋ, ಉಬರ್ ಚಾಲನೆ ಮಾಡುವವರಿಗೆ ಉಚಿತವಾಗಿ ವಾಹನ ಪರವಾನಿಗೆಯನ್ನು ಸಂಸ್ಥೆ ಅಡಿಯಲ್ಲಿ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.
ದ್ವಿಚಕ್ರ ವಾಹನದ ಡಿಎಲ್ ಈಗಾಗಲೇ ವಿತರಣೆ ಮಾಡಲಾಗಿದ್ದು ಇನ್ನು ಹೆಚ್ಚಿನ ಯುವಕರು ಅರ್ಜಿಯನ್ನು ಸಲ್ಲಿಸಿದ್ದಾರೆ. ವಾಹನ ಪರವಾನಿಗೆ ಬೇಕಾದವರು ನಮ್ಮ ಸಂಸ್ಥೆಯನ್ನು ಸಂಪರ್ಕಿಸಿದರೆ ಎಲ್ಲಾ ರೀತಿಯ ಸೇವೆಯನ್ನು ಕಲ್ಪಿಸಿ ಕೊಡುತ್ತಾರೆ ಎಂದು ಭರವಸೆ ನೀಡಿದರು. ಬಡ ಸಮುದಾಯದ ಏಳಿಗೆಗೆ ದುಡಿಯುತ್ತಿರುವ ಝೀಯು ಸಂಸ್ಥೆಯು ನಾನಾ ಸಮಾಜಮುಖಿ ಕಾರ್ಯಕ್ರಮವನ್ನು ಮಾಡಿಕೊಂಡು ಬರುತ್ತಿದೆ ಎಂದು ತಿಳಿಸಿದರು.