PLACE YOUR AD HERE AT LOWEST PRICE
ಕಾರ್ಮಿಕ ಇಲಾಖೆ ಅಧಿಕಾರಿಗಳು ಕಟ್ಟಡ ಕಾರ್ಮಿಕರಿಗೆ ಹಾಗೂ ಅವರ ಮಕ್ಕಳಿಗೆ ಮತ್ತು ಕುಟುಂಬಕ್ಕೆ ನೀಡಬೇಕಾದ ಸೌಲಭ್ಯಗಳು ಸಮರ್ಪಕಾಗಿ ನೀಡುತ್ತಿಲ್ಲವೆಂದು ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘಗಳ ಸಮನ್ವಯ ಸಮಿತಿ ಕಾರ್ಯಾಧ್ಯಕ್ಷ ಶಿವಕುಮಾರ ರೆಡ್ಡಿ ಆರೋಪಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕಳೆದ 2021-22 ರ ವಿದ್ಯಾರ್ಥಿ ವೇತನ ಇದುವರೆಗೆ ನೀಡಿಲ್ಲ,ವಸ್ತು ರೂಪದಲ್ಲಿ ಫಲಾನುಭವಿಗಳಿಗೆ ಸೌಲಭ್ಯಗಳನ್ನು ನೀಡಬಾರದೆಂದು ಆದೇಶವಿದ್ದರೂ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಿ ಕಳಪೆ ವಸ್ತುಗಳನ್ನು ನೀಡುತ್ತಿದ್ದಾರೆ,ಹೊಸ ಕಾರ್ಡ್ ಹಾಗೂ ನವೀಕರಿಸುವಾ ಕಾರ್ಮಿಕ ಎಂದು ಇಲಾಖೆ ಒಪ್ಪಿಕೊಂಡಿದ್ದರೂ ಸೌಲಭ್ಯಗಳನ್ನು ನೀಡುವಾಗ ಕಾರ್ಮಿಕ ಅಲ್ಲವೆಂದು ಅರ್ಜಿಗಳನ್ನು ನಿರಾಕರಿಸುತ್ತಿದ್ದಾರೆಂದು ಆರೋಪಿಸಿದರು.
ಮಧ್ಯವರ್ತಿ ಗಳ ಮೂಲಕ ಅಥವ ನೇರವಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳ್ನು ಮಾತ್ರ ಗಣನೆಗೆ
ತೆಗೆದುಕೊಳ್ಳುವ ಇಲಾಖೆಯ ಅಧಿಕಾರಿಗಳು ಸಂಘಗಳ ಮೂಲಕ ಸಲ್ಲಿಸುವ ಅರ್ಹ ಅರ್ಜಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲವೆಂದು ದೂರಿದರಲ್ಲದೆ ಹಿಂದೆ ಕೈ ಬರಹದ ಮೂಲಕ ನೊಂದಣಿ ಮಾಡಿಕೊಂಡಿರುವ ಸದಸ್ಯರು ಸೇವಾ ಸಿಂಧು ಮೂಲಕ ಅರ್ಜಿಗಳನ್ನು ಸಲ್ಲಿಸಿಲು ಸಾಧ್ಯವಾಗುತ್ತಿಲ್ಲವೆಂದು ವಿವರಿಸಿದರು.
ಜಿಲ್ಲೆಯಲ್ಲಿ ಸುಮಾರು 1 ಲಕ್ಷ 20 ಸಾವಿರ ಮಂದಿ ಕಾರ್ಮಿಕರು ಇಲಾಖೆಯಲ್ಲಿ ನೊಂದಣಿ ಮಾಡಿಕೊಂಡಿದ್ದು,ಅವರ ಕುಟುಂಬಗಳಿಗೆ ಸೇರ ಬೇಕಾದ ಸೌಲಭ್ಯಗಳನ್ನು ಒದಗಿಸಬೇಕು ಪ್ರಮುಖವಾಗಿ ಕಾರ್ಮಿಕ ಮಕ್ಕಳ ವಿಧ್ಯಾರ್ಥಿ ವೇತನ ಬಿಡುಗಡೆ ಮಾಡ ಬೇಕು,ಹೊಸ ಕಾರ್ಡ್ ಗಳ ನೊಂದಣಿ ಪ್ರಾರಂಭಿಸಬೇಕು,ಕಾರ್ಡ್ ನವೀಕರಣ ಆದ 45 ದಿನಗಳಲ್ಲಿ ವಿತರಣೆಗೆ ಕ್ರಮ ಕೈಗೊಳ್ಳಬೇಕು,ಮೂರು ತಿಂಗಳಿಗೆ ಒಮ್ಮೆ ಸಭೆ ಕರೆದು ಚರ್ಚೆ ಮಾಡಿ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಬೇಕು, ವಿದ್ಯಾರ್ಥಿಗಳ ಕಿಟ್ ಗಳನ್ನು ಎಲ್ಲರಿಗೂ ವಿತರಿಸಬೇಕು ಎಂದು ಒತ್ತಾಯಿಸಿದರು ಹಾಗೂ ಸರ್ಕಾರ ಕಾರ್ಮಿಕರು ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಹೋರಾಟ ಅನಿವಾರ್ಯ ವೆಂದರು.
ಪತ್ರಿಕಾಗೋಷ್ಠಿಯಲ್ಲಿ ಸಮನ್ವಯ ಸಮಿತಿಯ ಜಿಲ್ಲಾ ಅಧ್ಯಕ್ಷ ಕೆ.ಎಸ್.ಬಾಬು,ಉಪಾಧ್ಯಕ್ಷ ಬಿ.ಗೋವಿಂದಪ್ಪ,ಕಾರ್ಯದರ್ಶಿ ಯಲ್ಲಪ್ಪ, ವಿವಿಧ ಕಟ್ಟಡ ಕಾರ್ಮಿಕ ಸಂಘಗಳ ಪದಾಧಿಕಾರಿಗಳಾದ ಪ್ರಭಾಕರ್, ಫರ್ವೀನ್ ತಾಜ್,ಕೃಷ್ಣಮೂರ್ತಿ, ಸಂಪತ್ ಕುಮಾರ್, ದೇವಕಾಜ್,ಕೋಡಿಯಪ್ಪ ಉಪಸ್ಥಿತರಿದ್ದರು.
ಸುದ್ದಿ ಓದಿ ಹಂಚಿ ಪ್ರೋತ್ಸಾಹಿಸಿ:
ಇದನ್ನೂ ಓದಿ: ಎಲೆಕ್ಟ್ರಿಷಿಯನ್ ಕಾರ್ಮಿಕರ ನೋಂದಾಯಿಸಿ