PLACE YOUR AD HERE AT LOWEST PRICE
ಕೋಲಾರ ನಗರದ ಇಟಿಸಿಎಂ ಆಸ್ಪತ್ರೆಯನ್ನು ಮಾರಾಟ ಮಾಡಲು ಹೊರಟಿದ್ದಾರೆ ಎಂದು ಜಯದೇವ್ ಪ್ರಸನ್ನ ಮಾಡಿರುವ ಆರೋಪ ಶುದ್ಧ ಸುಳ್ಳು ಅವರ ಬಳಿ ಯಾವುದಾದರೂ ದಾಖಲೆ ಇದ್ದರೆ ತೋರಿಸಲಿ ಉತ್ತರ ಕೊಡುತ್ತೇವೆ ಅಂತ ಮೆಥೋಡಿಸ್ಟ್ ಚರ್ಚ್ ಮೇಲ್ವಿಚಾರಕ ಶಾಂತಕುಮಾರ್ ತಿಳಿಸಿದರು.
ಕೋಲಾರ ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿ ಮಾತನಾಡಿದ ಅವರು ಜಯದೇವಪ್ರಸನ್ನ ಮತ್ತು ಅವರ ತಂಡಹಣದ ಆಸೆಗೆ ಈರೀತಿ ಮಾತನಾಡುತ್ತಿದ್ದಾರೆ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ಮೆಥೋಡಿಸ್ಟ್ ಸಂಸ್ಥೆಗೆ ಹಾಗೂ ಕ್ರೈಸ್ತರಿಗೆ ಸಂಬಂಧಿಸಿದ ಆಸ್ತಿಯನ್ನು ಮಾರಾಟ ಮಾಡಲ್ಲ ಆದರೂ ಕೂಡ ಇವರು ಸಮಾಜಕ್ಕೆ ಕಳಂಕ ತರುವ ಕೆಲಸ ಮಾಡಿಕೊಂಡು ಬಂದಿದ್ದಾರೆ ಇವರು ಕೂಡ ಮುಕ್ತವಾಗಿ ಚರ್ಚಿಸಿ ಅಭಿವೃದ್ಧಿಗೆ ಸಹಕಾರ ನೀಡಲಿ ಎಂದರು.
ಈಗಾಗಲೇ ಆಸ್ಪತ್ರೆಯ ಅಭಿವೃದ್ಧಿಗಾಗಿ ದುಡಿಯುತ್ತಾ ಇದ್ದೇವೆ ಆಸ್ಪತ್ರೆಗೆ ಕ್ಯಾನ್ಸರ್ ಘಟಕ ತರಲಾಗುವುದು, ಎಂಆರ್ಐ, ಸ್ಕ್ಯಾನಿಂಗ್ ವ್ಯವಸ್ಥೆ ಮಾಡಲಾಗುತ್ತದೆ ಜೊತೆಗೆ ದಾನಿಗಳ ಮೂಲಕ ಅಭಿವೃದ್ಧಿ ಮಾಡಲಾಗುವುದು ನಮ್ಮ ಸಮುದಾಯದ ಉದ್ಯೋಗಿಗಳಿಗೆ ಕೆಲಸ ಸಿಗುತ್ತದೆ. ಯಾರನ್ನೂ ತೆಗೆಯುವುದಿಲ್ಲ ಹಣ ತಿಂದಿದ್ದರೆ ದಾಖಲೆ ಕೊಡಲಿ. ಬಂಗಾರಪೇಟೆಯ ಜಮೀನು ನಾನು ಬರುವ ಮುನ್ನ ನಡೆದಿದೆ. ಕಾರ್ಯಕಾರಿ ಮಂಡಳಿ ನಿರ್ಧಾರ ಕೈಗೊಂಡಿದೆ ಅನೇಕ ಬಾರಿ ಅವರ ಕುತಂತ್ರದಿಂದ ಸುಳ್ಳು ಆರೋಪ ಮಾಡಿ ದೂರುಗಳನ್ನು ದಾಖಲಿಸುತ್ತಿದ್ದಾರೆ ಎಂದರು.
ಮೆಥೋಡಿಸ್ಟ್ ಚರ್ಚ್ ಕಾರ್ಯದರ್ಶಿ ಫ್ರಾಂಕ್ಲಿನ್ ಡಿಸೋಜ ಮಾತನಾಡಿ, ಅವರು ಮಾಡಿದ ಅಷ್ಟು ಆರೋಪಗಳು ಶುದ್ಧ ಸುಳ್ಳು ಯಾರಿಗೂ ಮಾರಾಟ ಮಾಡಿಲ್ಲ. ಹಿಂದೆ ಬೇರೆ ಸಂಸ್ಥೆಗಳಿಗೆ ಕೊಟ್ಟಾಗ ಯಾಕೆ ಪ್ರಶ್ನೆ ಮಾಡಲಿಲ್ಲ ದೇವಕುಮಾರ್, ಆನಂದಕುಮಾರ್ ಬೆಂಗಳೂರಿಗೆ ಹೋಗಿ ಬಿಷಪ್ ಅವರನ್ನು ಭೇಟಿಮಾಡಿದ್ದಾರೆ ಇವರು ಎಲ್ಲಾ ಮಾಹಿತಿ ಕೊರತೆಯಿಂದ ಮಾತನಾಡಿದ್ದಾರೆ. ಒಳ್ಳೆಯ ಕೆಲಸ ಸಹಿಸಿಕೊಳ್ಳದೆ ಈ ರೀತಿ ಆರೋಪ ಮಾಡಿದ್ದಾರೆ ಎಂದರು.
ಕ್ರೈಸ್ತ ಮುಖಂಡ ಸುಧಿರ್ ಮಾತನಾಡಿ ಹೋರಾಟಗಾರ ಅಂತ ಹೇಳುವ ಜಯದೇವ ಪ್ರಸನ್ನ ಒಬ್ಬ ವಂಚಕ ಅವರ ಬಳಿ ದಾಖಲೆ ಇದ್ದರೆ ನಾವೇ ಶಾಂತಕುಮಾರ್ ವಿರುದ್ಧ ಹೋರಾಡುತ್ತೇವೆ. ಇದಕ್ಕೆಲ್ಲಾ ಕಾರಣ ಹಿಂದೆ ಇಟಿಸಿಎಂ ಆಸ್ಪತ್ರೆಯಲ್ಲಿ ಇದ್ದ ಜಾನ್ಸನ್. ಅವರ ವಿರುದ್ಧ ದೂರು ದಾಖಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಬಾಲರಾಜ್, ಡೇವಿಡ್ ಅಪ್ಪಾಜಿ, ರೂಪಕುಮಾರ್, ಪ್ರಭಾಕರ್ ಮುಂತಾದವರು ಇದ್ದರು.
ಇದನ್ನೂ ಓದಿ: ಕ್ರೈಸ್ತ ಮಿಷಿನರಿ ಆಸ್ತಿಗಳ ಪರಭಾರೆ ಖಂಡನೆ, ಬಿಷಪ್ ಮನೆ ಮುಂದೆ ಪ್ರತಿಭಟನೆ