PLACE YOUR AD HERE AT LOWEST PRICE
ಮಾಲೂರು ತಾಲೂಕಿನ ಕೆ.ಜಿ.ಹಳ್ಳಿ ಗ್ರಾಪಂನ ಓಬಟ್ಟಿ ಗ್ರಾಮದ ಅರಣ್ಯ ಬೆಟ್ಟದಲ್ಲಿ ನಡೆಯುತ್ತಿರುವ ಆಕ್ರಮ ಕಲ್ಲು ಗಣಿಗಾರಿಕೆಯ ವಿರುದ್ಧ ತನಿಖೆ ನಡೆಸಿ ಗಣಿಗಾರಿಕೆ ಮುಂದುವರಿಸದಂತೆ ತಡೆಯಬೇಕು ಎಂದು ಓಬಟ್ಟಿ ಗ್ರಾಮಸ್ಥರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಈ ಕುರಿತ ಮನವಿಯಲ್ಲಿ ತಾಲೂಕಿನ ಓಬಟ್ಟಿ ಗ್ರಾಮದಲ್ಲಿ ಆಕ್ರಮ ಕಲ್ಲು ಗಣಿರಿಗೆ ಸ್ಫೋಟದಲ್ಲಿ ಗ್ರಾಮದ ನರಸಿಂಹಪ್ಪ.ಒ.ಎಂ ಹಾಗೂ ನರಸಿಂಹ.ಕೆ ಅವರು ತೊಡಗಿ ಬೆಟ್ಟದಲ್ಲಿ ನ ಬಂಡೆಗಳ ಸಂಪತ್ತು ಅನ್ನು ಕಳೆದ ನಾಲಕ್ಕು ತಿಂಗಳಿಂದ ಲೂಟಿಯನ್ನು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ಕಲ್ಲು ಗಣಿಗಾರಿಕೆಯಿಂದ ಗ್ರಾಮದ ಬೆಟ್ಟದಲ್ಲಿ ಗುಡ್ಡಗಳು ಕರಗಿ ಹೋಗಿದ್ದು, ಕಂದಕಗಳ ರೂಪದಲ್ಲಿ ನಿರ್ಮಾಣವಾಗಿದೆ. ದಿನನಿತ್ಯ ಬೃಹತ್ ಪ್ರಮಾಣದ ಜಿಲೆಟಿನ್ ಸ್ಫೋಟದಿಂದ ಸುತ್ತಮುತ್ತಲಿನ ತೋಟಗಳಿಗೆ ಹೊಲಗಳಿಗೆ ಧಕ್ಕೆಯಾಗಿದೆ.
ಬೌನ್ಸ್ ಪಟದಿಂದ ಮನೆಗಳಿಗೆ ಹಾಗೂ ಕೆರೆಕಟ್ಟೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದು, ಅನುಮತಿ ಇಲ್ಲದೆ ನಡೆಯುತ್ತಿರುವ ಗಣಿಗಾರಿಕೆಯನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗಣಿಗಾರಿಕೆ ನಡೆಸದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.