PLACE YOUR AD HERE AT LOWEST PRICE
ಕೆಜಿಎಫ್:ಬೇತಮಂಗಲ ಗ್ರಾಮದ ಶ್ರೀ ದತ್ತ ಸಾಯಿ ವಿದ್ಯಾ ಸಂಸ್ಥೆಯಲ್ಲಿ ಅಂತರಾಷ್ಟ್ರೀಯ ಮಹಿಳೆಯರ ದಿನದ ಪ್ರಯುಕ್ತ ವಿವಿಧ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಸಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈದ ಮಹಿಳೆಯರನ್ನು ನೆನಪಿಸಿಕೊಳ್ಳಲಾಯಿತು.
ಈ ವೇಳೆ ಶಾಲಾ ಕಾರ್ಯದರ್ಶಿ ಅ.ಮು.ಲಕ್ಷ್ಮೀನಾರಾಯಣ್ ಮಾತನಾಡಿ, ದೇಶ- ಅಂತರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ, ಯಾವುದೇ ಕ್ಷೇತ್ರದಲ್ಲಿ ಆಗಲಿ ಮಹಿಳೆಯರು ಪುರುಷರಿಗಿಂತ ಏನು ಕಡಿಮೆ ಇಲ್ಲವೆಂಬುವುದು ಸಾಧನೆ ಮಾಡುವ ಮೂಲಕ ಸಾಭೀತು ಪಡಿಸಿದ್ದಾರೆ ಎಂದರು.
ಶ್ರೀ ದತ್ತ ಸಾಯಿ ವಿದ್ಯಾ ಸಂಸ್ಥೆಯಲ್ಲಿ ಶಾಲೆಗೆ ಪ್ರಥಮ (625 ಅಂಕ) ಪಡೆಯುವ ವಿದ್ಯಾರ್ಥಿಯ ಸಂಪೂರ್ಣ ಶಿಕ್ಷಣವನ್ನು ಸಂಸ್ಥೆಯ ವತಿಯಿಂದಲ್ಲೇ ವಹಿಸಿಕೊಳ್ಳುವುದಾಗಿ ಭರವಸೆ ನೀಡಿದರು.
ಈ ವೇದಿಕೆಯಲ್ಲಿ ಶಾಲೆಯ ಅಧ್ಯಕ್ಷೆ ಲಲಿತಮ್ಮ ಲಕ್ಷ್ಮೀನಾರಾಯಣ್, ಆಡಳಿತಾಧಿಕಾರಿ ಜಲಜಾ ಮಂಜುನಾಥ್, ಮುಖ್ಯ ಶಿಕ್ಷಕಿ ಸುಜಾತ, ಶಾಲಾ ಸಮಿತಿಯ ವಿಜೇಂದ್ರ, ಶ್ರೀಮತಿ ವಿಜೇಂದ್ರ ಸೇರಿದಂತೆ ಸಹ ಶಿಕ್ಷಕರು ಹಾಜರಿದ್ದರು.