• Sun. Sep 8th, 2024

ಸೈಕಲ್ ಜಾಥಾ ಮಾಡುತ್ತಿರುವ ಅಪ್ಪು ಅಭಿಮಾನಿಗೆ ಅದ್ದೂರಿ ಸನ್ಮಾನ.

PLACE YOUR AD HERE AT LOWEST PRICE

ಶ್ರೀನಿವಾಸಪುರ:ಪುನೀತ್ ರಾಜಕುಮಾರ್ ವಿಧಿವಶರಾಗಿ ಎರಡು ವರ್ಷ ಕಳೆದರೂ ಸಹ ಜನರ ಪ್ರೀತಿ ಮಾತ್ರ ಹಾಗೆ ಮುಂದುವರಿಯುತ್ತಿದೆ. ಅದೇ ರೀತಿಯಾಗಿ ಪುನೀತ್ ಅಭಿಮಾನಿಯೊಬ್ಬ ತಮಿಳುನಾಡಿನಿಂದ ಸೈಕಲ್ ಜಾಥವನ್ನು ಆರಂಭಿಸಿ ದೇಶವನ್ನು ಪೂರ್ತಿ ಸೈಕಲ್ ನಲ್ಲಿ 3 ವರ್ಷದಲ್ಲಿ ಸುತ್ತಬೇಕು ಎಂಬ ನಿಟ್ಟಿನಲ್ಲಿ ಸೈಕಲ್ ಜಾಥವನ್ನು ನಡೆಸುತ್ತಿದ್ದಾರೆ.

1954 ಕಿಲೋಮೀಟರ್ ಪೂರ್ಣಗೊಳಿಸಿ  ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣಕ್ಕೆ ಪುನೀತ್ ಅಭಿಮಾನಿ ಮುತ್ತು ಸಲ್ವನ್ ಭೇಟಿ ನೀಡಿದ್ದ ವೇಳೆ  ಶ್ರೀನಿವಾಸಪುರ ತಾಲ್ಲೂಕಿನ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಬಳಗವತಿಯಿಂದ ಪುನೀತ್ ಅಭಿಮಾನಿ ಮುತ್ತುಸಲ್ವನ್ ಗೆ ಸನ್ಮಾನಿಸಿ ಗೌರವಿಸಿ ಸ್ವಲ್ಪ ಮಟ್ಟಿಗೆ  ಸಹಾಯವನ್ನು ಸಹ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುನೀತ್ ಅಭಿಮಾನಿ  ಆದ ನಾನು ಸೈಕಲ್ ಯಾತ್ರೆಯನ್ನು ಆರಂಭಿಸಿರುವ ಹಿನ್ನೆಲೆಯಲ್ಲಿ ಮಾಹಿತಿಯನ್ನು ಪಡೆದಿದ್ದ ಪುನೀತ್ ಧರ್ಮಪತ್ನಿ ಅಶ್ವಿನಿ ಪುನೀತ್ ರವರು ಪಿಆರ್ ಕೆ ಪ್ರೊಡಕ್ಷನ್ಸ್ ನ ಗಂಧದ ಗುಡಿ ಚಿತ್ರದ ಟೀ ಶರ್ಟ್ ಹಾಗೂ ಪುನೀತ್ ಬಳಕೆ ಮಾಡಿದ್ದ ಜೇಮ್ಸ್ ಚಿತ್ರದ ಕನ್ನಡಕವನ್ನು ನೀಡಿ ಶುಭ ಹಾರೈಸಿದರು.

ನಾನು ಈಗಾಗಲೇ ಬಹಳಷ್ಟು ರಾಜ್ಯಗಳನ್ನು ಸುತ್ತಿದ್ದೇನೆ ಎಲ್ಲಾ ರಾಜ್ಯಗಳಲ್ಲಿಯೂ ಸಹ ರಾಜ್ ಕುಮಾರ್ ಕುಟುಂಬದ ಅಭಿಮಾನಿಗಳಿದ್ದು ಬಹಳ ಉತ್ತಮ ರೀತಿಯಲ್ಲಿ ನನಗೆ ಶುಭ ಹಾರೈಸಿ ಆತ್ಮೀಯವಾಗಿ ಬರಮಾಡಿಕೊಂಡರೆಂದರು.

Leave a Reply

Your email address will not be published. Required fields are marked *

You missed

error: Content is protected !!