PLACE YOUR AD HERE AT LOWEST PRICE
ದ ವೇಳೆ ದಲ್ಲಿ : .
ಮುಳಬಾಗಿಲು:ಅಂಗೊಂಡಹಳ್ಳಿ ಗ್ರಾ.ಪಂ. ನಲ್ಲಿ ೧೭ ಸದಸ್ಯರಿದ್ದು ಅವರ ಪೈಕಿ ೧೦ ಸದಸ್ಯರು ಶಿರಡಿ ಮತ್ತು ಬಾಂಬೆ ಪ್ರವಾಸ ಹೋಗಿ ಹಿಂದಿರುಗುತ್ತಿದ್ದಾಗ ನೆಲಮಂಗಳ ಸಮೀಪ ಉಂಟಾದ ರಸ್ತೆ ಅಪಘಾತದಲ್ಲಿ ಇಬ್ಬರು ಸದಸ್ಯರು ಮೃತಪಟ್ಟು ಮೂವ್ವರು ಗಂಬೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದರು.
ಇದರ ನಡುವೆ ಸೋಮವಾರ ನಿಗದಿತ ಸಮಯಕ್ಕೆ ಅಂಗೊಂಡಹಳ್ಳಿ ಗ್ರಾ.ಪಂ. ಕಚೇರಿಯಲ್ಲಿ ಚುನಾವಣಾಧಿಕಾರಿ ಶಿವಕುಮಾರಿ ಹಾಜರಾಗುತ್ತಿದ್ದಂತೆ ನಾಲ್ವರು ಕಾಂಗ್ರೆಸ್ ಸದಸ್ಯರು ಹಾಜರಾಗಿದ್ದರು.
ಚುನಾವಣೆ ಸಂದರ್ಭದಲ್ಲಿ ಈ ಗ್ರಾಪಂ ಸದಸ್ಯರು ಅಪಘತದಲ್ಲಿ ಮೃತಪಟ್ಟ ದೃಷ್ಟಿಯಿಂದ ಪ್ರಸ್ತುತ ನಾಮಪತ್ರ ಸಲ್ಲಿಸುವುದು ಬೇಡವೆಂದು ಹಾಜರಿದ್ದ ಸದಸ್ಯರು ವಾಪಸ್ಸು ಹೋಗಿದ್ದಾರೆ.
ನಿಗದಿತ ಅವದಿಯ ವರೆಗೂ ಕಾದಿದ್ದ ಚುನಾವಣಾಧಿಕಾರಿಗಳು ಚುನಾವಣೆಯನ್ನು ಮಂಗಳವಾರಕ್ಕೆ ಮುಂದೂಡಿದರು.