PLACE YOUR AD HERE AT LOWEST PRICE
ಕೆಜಿಎಫ್:ಶ್ರೀ ವಿಜೇಂದ್ರ ಸ್ವಾಮಿಯ ಬ್ರಹ್ಮರಥೋತ್ಸದ ಪ್ರಯುಕ್ತ ನಡೆಯುವ ಶ್ರೀ ದ್ರೌಪತಾಂಭ ಧರ್ಮರಾಯ ಸ್ವಾಮಿಯ ಕರಗ ಮಹೋತ್ಸವ ಹಿನ್ನಲೆ ಹಸಿ ಕರಗ ವಿಜೃಂಭಣೆಯಿಂದ ಸಾವಿರಾರೂ ಭಕ್ತರ ಸಮ್ಮುಖದಲ್ಲಿ ನಡೆಯಿತು.
ಬೇತಮಂಗಲದ ಹಳೆ ಬಡಾವಣೆಯಲ್ಲಿ ನೆಲೆಸಿರುವ ಶ್ರೀ ದ್ರೌಪತಂಭ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದು, ರಾತ್ರಿ 8 ಗಂಟೆ ಸುಮಾರಿಗೆ ಪಾಲಾರ್ ಕೆರೆಯ ನದಿಯ ಕೋಡಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಸಿ ಕರಗವನ್ನು ಹೊರ ತರಲಾಯಿತು.
ಕರಗ ಪೂಜಾರಿ ಕೃಷ್ಣಮೂರ್ತಿ ಹಾಗೂ ಇಬ್ಬರು ವೀರ ಕುಮಾರರು ಕರಗವನ್ನು ಹಿಡಿದು ತಮಟೆ ಶಬ್ಧಕ್ಕೆ ನೃತ್ಯ ಮಾಡುವ ಮೂಲಕ ನೆರೆದಿದ್ದ ಭಕ್ತರನ್ನು ರಂಜಿಸಿದರು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಸಿ ಕರಗ ಸಂಚಾರ ನಡೆಸಿ ಸಾರ್ವಜನಿಕರಿಂದ ಪೂಜೆ ಸ್ವೀಕರಿಸಿದರು.