PLACE YOUR AD HERE AT LOWEST PRICE
ಬಂಗಾರಪೇಟೆ:ಪ್ರತಿ ವರ್ಷ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತಿತ್ತು ಆದರೆ ಈ ವರ್ಷ ತಾಲೂಕು ಆಡಳಿತ ಕಡೆಗಣಿಸಿದೆ ಎಂದು ಹುಲಿಬೆಲೆ ಗ್ರಾಂದ ಜನಾರ್ದನ್ ಆರೋಪ ಮಾಡಿದ್ದಾರೆ.
ಅವರು ಪಟ್ಟಣದ ಕೆಂಪೇಗೌಡರ ವೃತ್ತದ ಬಳಿ ಹುಲಿಬೆಲೆ ಹಾಗೂ ಅಬ್ಗಿರಿಹೊಸಹಳ್ಳಿ ಗ್ರಾಮಸ್ಥರಿಂದ ಕೆಂಪೇಗೌಡರ ಪುತ್ತಳಿಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಾ, ಈ ವರ್ಷ ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ತಾಲೂಕು ಆಡಳಿತ ಕಡೆಗಣಿಸಿದೆ.
ಈ ವರ್ಷ ಕನಿಷ್ಠ ಪಕ್ಷ ಸಮುದಾಯದ ಮುಖಂಡರನ್ನು ಕರೆದು ಒಂದು ಪೂರ್ವಭಾವಿ ಸಭೆಯನ್ನು ಸಹ ಮಾಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಾಡಪ್ರಭು ಕೆಂಪೇಗೌಡರು ಬೆಂಗಳೂರು ನಗರ ಕಟ್ಟಿದಂತಹ ಮಹಾನ ವ್ಯಕ್ತಿ ಸುಮಾರು ಕೆರೆಗಳನ್ನು ನಿರ್ಮಿಸಿದ್ದಾರೆ.
ಹಸಿದವರಿಗೆ ಅನ್ನವನ್ನು ನೀಡಿದ್ದಾರೆ ಇವರ ಜಯಂತಿ ಕಾರ್ಯಕ್ರಮವನ್ನು ನಮ್ಮ ಸಮುದಾಯದ ಮುಖಂಡರು ಹಾಗೂ ತಾಲೂಕ ಆಡಳಿತ ಎಲ್ಲರೂ ಒಟ್ಟುಗೂಡಿ ಜೂನ್ 27ರಂದು ಅದ್ದೂರಿಯಾಗಿ ಆಚರಣೆ ಮಾಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಗಣೇಶ್ ಗೌಡ, ಜೀವನ್ ಗೌಡ, ಗೋಪಾಲ,ಚಂದ್ರಪ್ಪ, ಲವಾ, ಕಿರಣ್, ಕೀರ್ತಿ,ಜಿ.ಗೋಪಾಲ್, ಗೋವಿಂದ, ಚೌಡಪ್ಪ ಮೊದಲಾದವರು ಇದ್ದರು.
(ನಮ್ಮಸುದ್ದಿ.ನೆಟ್) nammasuddi.net ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.