PLACE YOUR AD HERE AT LOWEST PRICE
ಕೆಜಿಎಫ್:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಶ್ರೀ ರೇಣುಕಾ ಯಲ್ಲಮ್ಮ ದೇಗುಲ ಅಭಿವೃದ್ಧಿ ಕಾಮಗಾರಿಗೆ ೨ ಲಕ್ಷ ಅನುದಾನವನ್ನು ಪೂಜ್ಯ ವೀರೇಂದ್ರ ಹೆಗ್ಗಡೆಯವರು ನೀಡಿರುವುದಾಗಿ ಜಿಲ್ಲೆಯ ನಿರ್ದೇಶಕರಾದ ಪದ್ಮಯ ತಿಳಿಸಿದರು.
ಗ್ರಾಮದ ಸಮೀಪದ ಸುಂದರಪಾಳ್ಯ ಗ್ರಾಪಂಯ ರಾಯಸಂದ್ರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ರೇಣುಕಾ ಯಲ್ಲಮ್ಮ ದೇಗುಲಕ್ಕೆ ಶ್ರೀ ಕ್ಷೇತ್ರದಿಂದ ೨ ಲಕ್ಷದ ಚೆಕ್ ವಿತರಣೆ ಮಾಡಿ ಮಾತನಾಡಿದರು.
ಅದೇ ರೀತಿ ಪ್ರತಿವಾರವೂ ಶ್ರೀ ಕ್ಷೇತ್ರದಲ್ಲಿ ಇಂತಹಹಲವಾರು ದೇವಸ್ಥಾನಗಳಿಗೆ ಶ್ರೀ ಕ್ಷೇತ್ರದ ವತಿಯಿಂದ ವಾರಕ್ಕೆ ಸುಮಾರು ೫೦ ರಿಂದ ೭೫ ಲಕ್ಷದ ವರೆಗೂ ಅನುದಾನವನ್ನು ಪೂಜ್ಯರು ದೇಗುಲಗಳ ಅಭಿವೃದ್ಧಿಗೆ ನೀಡುತ್ತಾರೆ.
ಕೋಲಾರ ಜಿಲ್ಲೆಗೆ ಪ್ರತಿವಾರವೂ ಹತ್ತರಿಂದ ಇಪ್ಪತ್ತು ಲಕ್ಷದವರೆಗೆ ಅನುದಾನವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೆಜಿಎಫ್ ತಾಲ್ಲೂಕು ಯೋಜನಾಧಿಕಾರಿ ಮಹದೇವ್ ನಾಯ್ಕಕ್ ಮಾತನಾಡಿ, ಶ್ರೀ ಕ್ಷೇತ್ರದಿಂದ ಬಂದಿರುವ ೨ ಲಕ್ಷದ ಚೆಕ್ ಶ್ರೀ ಕ್ಷೇತ್ರದ ಪ್ರಸಾದ ರೂಪದಲ್ಲಿ ಬಂದಿದ್ದು, ಇದು ಮುಂದಿನ ದೇವಸ್ಥಾನದ ಕೆಲಸ ಕಾರ್ಯಗಳಿಗೆ ಸುಗಮವಾಗಿ ಪೂರ್ಣಗೊಳ್ಳಲು ಸಹಾಯವಾಗುತ್ತದೆ ಎಂದರು.
ಶ್ರೀ ಕ್ಷೇತ್ರದಿಂದ ಸಮಾಜದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನರ ಬಳಿಗೆ ಮುಟ್ಟುವಂತಹ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ಬಸವರಾಜು, ಸೇವಾ ಪ್ರತಿನಿಧಿ ನಂದಿನಿ, ಹಿಂದುಳಿದ ವರ್ಗಗಳ ಅಧ್ಯಕ್ಷರಾದ ಹನುಮಂತಪ್ಪ, ಶ್ರೀ ರೇಣುಕಾ ಯಲ್ಲಮ್ಮ ದೇಗುಲ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.