PLACE YOUR AD HERE AT LOWEST PRICE
1950 ರ ದಶಕದಲ್ಲಿ ಕನ್ನಡ ಚಿತ್ರರಂಗದ ಸಸಿಗೆ ಪಾತಿ ಮಾಡಿ, ಗೊಬ್ಬರ ಹಾಕಿ, ಆಧಾರಕೊಟ್ಟು ಬೆಳೆಸುವ ಕಾಯಕವನ್ನು ಡಾ.ರಾಜ್ ಕುಮಾರ್ ಮಾಡಿ ಧನ್ಯರಾಗಿ ಕೀರ್ತಿಶೇಷರಾದರು.
2020 ರ ದಶಕದಲ್ಲಿ ಕನ್ನಡ ಚಿತ್ರರಂಗದ ಹೆಮ್ಮರವು ದಶದಿಕ್ಕುಗಳಿಗೆ ಕೊಂಬೆ ರೆಂಬೆಗಳನ್ನು ಚಾಚಿದ್ದು ವಿಶ್ವ ಮಾನ್ಯವಾಗಿದೆ. ಈಗ ಭಾಷಾವಾರು ಚಿತ್ರರಂಗವು ತೆರೆ ಮರೆಗೆ ಸಂದಿದ್ದು “ಭಾರತೀಯ ಚಿತ್ರರಂಗ” ಎಂಬುದು ಮುಂದಾಗಿದೆ.
ಇದಕ್ಕೆ ತಕ್ಕಂತೆ ಶಿವರಾಜ್ ಕುಮಾರ್ ಅವರು ಸೂಕ್ತ ರೀತಿಯಲ್ಲಿ ನಡೆ ನುಡಿ ಆಡುತ್ತಿದ್ದಾರೆ. ಇದರಲ್ಲಿ ಯಾವುದೇ ವಿಧವಾದ ದೋಷವಿಲ್ಲ.
ಇನ್ನು ಮುಂದೆ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡೇ ಕರ್ನಾಟಕವು ಭಾರತೀಯವಾಗುವುದು ಮಾತ್ರವಲ್ಲ! ವಿಶ್ವಮಾನ್ಯವಾಗುವತ್ತ ಮುನ್ನಡೆದು ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ಸಾರ್ಥಕಗೊಳಿಸಬೇಕು!
ಜೈ ಕರ್ನಾಟಕ ಮಾತೆ ! ಜೈ ಭಾರತ ಮಾತೆ !
ಜೈ ಪೃಥ್ವೀ ಮಾತೆ ! ಜೈ ವಿಶ್ವ ಮಾತೆ !
– ಪ್ರಸನ್ನಭೈರವ: ೧೪.೦೭.೨೩
(ನಮ್ಮಸುದ್ದಿ.ನೆಟ್) nammasuddi.net
ನಲ್ಲಿ ಜಾಹಿರಾತಿಗಾಗಿ ಸಂಪರ್ಕಿಸಿ:
ಕೆ.ಎಸ್.ಗಣೇಶ್-9448311003. ಸಿ.ವಿ.ನಾಗರಾಜ್-9632188872. ಕೆ.ರಾಮಮೂರ್ತಿ-9449675480.